ದುಃಖದಲಾವಿ ಐಸುರ

ದುಃಖದಲಾವಿ ಏ ಐಸುರ ಪೇಳುವ ಸುದ್ಧಿ
ಮಕ್ಕಾಮದೀನ ವಿಸ್ತಾರ || ಪ್ರ ||

ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು
ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ
ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ ಜನ
ಭಾಷೆ ಬಲ್ಮೆ ಹಾಸ್ಯನರವರ ದಾಸರಲ್ಲವು ಕರುಣ ಶರಧಿ || ೧ ||

ಯಂಥಾ ಕೆಡಕ ಯಜೀದ
ಪಂಥಾ ಹ್ಯಾವ ಬಹಳ ಪಿತೂರಿ ನಡಸಿದ
ಅಂತರಂಗದಿ ಪತ್ರಬರೆದು ಬೇಗನೆ ಕಳಿಸಿ
ತಂತ್ರ ತಿಳಿಯದೆ ಜಲ್ಮ ಕೊಲಿಸ್ಯಾನೋ ಕ್ಷಣದಲ್ಲಿ
ರಂಗ ಮಾಣಿಕ ಹಾರ ಕೊರಳೊಳು
ಮಂಗಲಾತ್ಮಕ ಮಹಿಮ ತಿಳಿದು ಪೂರ
ಯಂಕಟ ರಿಗಮ ಗರಿ ಗರಿ
ಪಮ ಗರಿ ಗರಿ ರಿಗಮ ಪದಾ || ೨ ||

ಪಡಿದಾ ಶಿವ ಶಿವ ಎನ್ನುತ
ಒಡಿಯಸ್ವಾಮಿ ಮುನಿದಾನು ಶ್ರೀ ಗುರುನಾಥ
ಕಡಲಶಯನ ಕಾಲ ಸಾಂಬನೆ ಗತಿಯೆಂದು
ಬಿಡದೆಯೆಂದು ಮುಕ್ತಿ ಪಡೆದಾನು ಕರ್ಬಲದಿ
ಗೋಪುರ ಪಂಚಮ ಹರಿವರ
ದೀಪ ಸಂಪನ್ನ ತಾಳಿ ಉದರದಿ
ರೂಪ ಮೀರಿದ ಶಶಿಯು ದ್ರೌಪದಿ
ಆಳಿದವನು ಧರ್ಮನು || ೩ ||

ನೀಗಿತು ಮಾಯಾಮಥನ
ಮೋಸದಲಿ ಮೂಲಾತು ಕಬ೯ಲ ಸದನ
ತೂಗಿ ಹಾಡುವೆ ಗ್ರಾಮ ಶಿಶುನಾಳಧೀಶನ
ತೂಗಿ ಆಡು ಅಲಾವಿ ನೀನ || ೪ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಲಾಹಲವಾದಿತು ಕಲಹದಲಿ
Next post ಧೀನ ಖೇಲ ಮದೀನದಲಾವಿ ನೋಡ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys